ಕಕ್ಷೆ

ಹಕ್ಕಿ ಬಳಗ ಮೇಲೇರುತ ಸಾಗಿದೆ
ಹರುಷ-ಹರುಷ ಹೊತ್ತು
ಮಣ್ಣಿನಣುಗ ತಾ ಸೋತು ಸೊರಗುತಿಹ
ಬದುಕಲು ಪಡೆಯಲೊಂದು ತತ್ತು ||

ಜ್ಞಾನ ವಿಜ್ಞಾನದಾಗಸದೆತ್ತರ
ಮಿಂಚು ಹುಳದ ಮಿಣುಕು
ಬಾಳ ಬಾಂದಳಕೆ ತಿಂಗಳ ಬೆಳಕನು
ಕೊಡ ಬಲದೆ, ಯಾವ ಕ್ಷಣಕುಽ ||

ಏರಿ-ಏರುತಲಿ ಹಾರಿ ಸಾಗುತಿರೆ
ಸಿರಿ ವೈಮಾನದ ಯಾನ
ಅಂಬಲಿಗ್ಹವಣಿಸೋ ಕಂದಗಳಿಗೆಂತೋ
ಹಸಿವ್ಹಸಿವಿನ ತೋಂತನನ ||

ಇರುವುದನುಣ್ಣದ ನಿರದನು ಬಯಸೊ
ಸಿರಿಗರ ಬಡಿದು ನಿಂತ ಜನರೊ
ಇರುವಿಕೆಗಾಗಿಯುಽ ಉಣ್ಣಲಿರದೆ
ಹಪ ಹಪಿಸಿ ತಪಿಸೊ ಜನರು ||

ತಂತ್ರ-ತಂತ್ರಗಳು-ಪಾರತಂತ್ರ್‍ಯ
ಬಲೆ ನೇಯುವ ಬಿನ್ನಾಣ
ವಿಭ್ರಾಂತಿ-ಭ್ರಾಂತಿ ಮುಸುಕಿನಲಿ
ಸ್ವಾತಂತ್ರ್‍ಯವಾಗುತಿದೆ ನಿತ್ಯ ಹರಣ ||

ಬಣ್ಣ ಬಣ್ಣದಿ ತೋರಿದರೇನು
ಬೆಳೆ ಬೆಳೆದ ನೀಲ ನಕ್ಷೆ
ಬಣ್ಣಿಪ ಬಾಯ್ಗಳು ತುಂಬಬಹುದೆ
ಹಸಿದೊಡಲ ಚೀಲ ಕಕ್ಷೆ ||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧನಿಗಳು ದೊಂಬಿಗೆ ಹೋಗಿದ್ದಾರೆ
Next post ರೋಮಾಂಚನ!

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys